Ad Code

ಛಂದಸ್ಸು


  • 'ಛಂದೋಂಬುಧಿ' ಎಂಬುದು - ಕನ್ನಡ ಛಂದಸ್ಸನ್ನು ತಿಳಿಸುವ ಗ್ರಂಥ.
  • 'ಛಂದೋಂಬುಧಿ' ಗ್ರಂಥವನ್ನು ಬರೆದವನು - ಒಂದನೇ ನಾಗವರ್ಮ.
  • ಒಂದನೇ ನಾಗವರ್ಮನು ಬರೆದಿರುವ ಮತ್ತೊಂದು ಗ್ರಂಥ - ಕರ್ನಾಟಕ ಕಾದಂಬರಿ.
  • ಒಂದನೇ ನಾಗವರ್ಮನ ತಂದೆ ತಾಯಿಯರ ಹೆಸರು - ವೆಣ್ಣಮಯ್ಯ ಮತ್ತು ಹೋಕಳಬ್ಬೆ.
  • ಒಂದನೇ ನಾಗವರ್ಮನಿಗಿದ್ದ ಬಿರುದುಗಳು - ಕವಿರಾಜಹಂಸ, ಬುಧಾಬ್ಜವನಕಳಂಸ, ಕಂದಕಂದರ್ಪ.
  • ಒಂದನೇ ನಾಗವರ್ಮನ ಆಶ್ರಯದಾತನಾಗಿದ್ದವನು - ಗಂಗರ ಮಂತ್ರಿ ಚಾವುಂಡರಾಯ.
  • ಒಂದನೇ ನಾಗವರ್ಮನ ಗುರುಗಳು - ಅಜಿತಸೇನದೇವ.
  • ಕನ್ನಡ ಭಾಷೆಯಲ್ಲಿ ಲಭ್ಯವಿರುವ ಗ್ರಂಥಗಳಲ್ಲಿ ಮೊದಲಿನವು - ಪಂಪನ ಆದಿಪುರಾಣ ಮತ್ತು ವಿಕ್ರಮಾರ್ಜುನ ವಿಜಯ.
  • ಚಂಪೂಕಾವ್ಯಗಳು ಎಂದರೆ - ಗದ್ಯಪದ್ಯಗಳಿಂದ ಕೂಡಿದ ಕಾವ್ಯಗಳು.
  • ಚಂಪೂಕಾವ್ಯಗಳನ್ನು ರಚಿಸಿರುವ ಪ್ರಮುಖ ಕವಿಗಳು - ಪಂಪ, ರನ್ನ, ಜನ್ನ, ಅಭಿನವ ಪಂಪ ಮುಂತಾದವರು.
  • ಹರಿಹರೇಶ್ವರನೆಂಬ ಕವಿಯು ಈ ಛಂದಸ್ಸಿನಲ್ಲಿ ಕಾವ್ಯಗಳನ್ನು ರಚಿಸಿದನು - ರಗಳೆಯ ಛಂದಸ್ಸು.
  • ರಾಘವಾಂಕನು ಈ ಛಂದಸ್ಸಿನಲ್ಲಿ ಕಾವ್ಯಗಳನ್ನು ರಚಿಸಿದನು - ಷಟ್ಪದಿಗಳ ಛಂದಸ್ಸು.
  • ರತ್ನಾಕರವರ್ಣಿಯು ಸಾಂಗತ್ಯವೆಂಬ ದೇಶೀಯ ಛಂದಸ್ಸಿನಲ್ಲಿ ಬರೆದ ಕೃತಿ - ಭರತೇಶ ವೈಭವ.
  • ಪದ್ಯಗಳು ಎಂದರೆ - ಒಂದು ಗೊತ್ತಾದ ಸಾಲುಗಳ ನಿಯಮದಿಂದ ಬರೆದವುಗಳು.
  • ಪದ್ಯಗಳ ಪ್ರತಿಯೊಂದು ಸಾಲಿನ ಒಂದನೆಯ ಮತ್ತು ಎರಡನೆಯ ಸ್ವರಗಳ ಮಧ್ಯದಲ್ಲಿ ಒಂದೇ ರೀತಿಯ ವ್ಯಂಜನಾಕ್ಷರಗಳು ಬರುವುದಕ್ಕೆ ಹೀಗೆನ್ನುವರು - ಪ್ರಾಸ.
  • ಪ್ರಾಸಗಳಲ್ಲಿರುವ ವಿಧಗಳ ಸಂಖ್ಯೆ - ಆರು.
  • ಒಂದು ಎರಡನೆಯ ಸ್ವರಗಳ ನಡುವೆ ಒಂದೇ ವಿಧದ ಒಂದು ವ್ಯಂಜನ ಬಂದು ಹಿಂದಿನ ಸ್ವರ ಹ್ರಸ್ವವಾಗಿದ್ದರೆ ಅದು - ಸಿಂಹಪ್ರಾಸ.
  • ಒಂದು ಎರಡನೆಯ ಸ್ವರಗಳ ನಡುವೆ ಒಂದೇ ವಿಧದ ಒಂದು ವ್ಯಂಜನ ಬಂದು ಹಿಂದಿನ ಸ್ವರ ದೀರ್ಘವಾಗಿದ್ದರೆ ಅದು - ಗಜಪ್ರಾಸ.
  • ಪ್ರಾಸಾಕ್ಷರದ ಹಿಂದೆ ಅನುಸ್ವಾರ (ಅಂ) ಇದ್ದರೆ ಅದು - ವೃಷಭಪ್ರಾಸ.
  • ಪ್ರಾಸಾಕ್ಷರದ ಹಿಂದೆ ವಿಸರ್ಗ (ಅಃ) ಇದ್ದರೆ ಅದು - ಅಜಪ್ರಾಸ.
  • ಬೇರೆ ಬೇರೆ ಜಾತಿಯ ಎರಡು ಮೂರು ವ್ಯಂಜನಗಳು ಪ್ರಾಸಾಕ್ಷರಗಳಾಗಿದ್ದರೆ ಅದು - ಶರಭಪ್ರಾಸ.
  • ಒಂದೇ ಜಾತಿಯ ಎರಡು ವ್ಯಂಜನಗಳು ಪ್ರಾಸಾಕ್ಷರಗಳಾಗಿದ್ದರೆ ಅದು - ಹಯಪ್ರಾಸ.
  • ಯತಿ ಎಂದರೆ - ಪದ್ಯಗಳನ್ನು ಓದುವಾಗ ನಿಲ್ಲಿಸುವ ಸ್ಥಳಗಳು.
  • ಛಂದಶಾಸ್ತ್ರದಲ್ಲಿ ಗಣ ಎಂದರೆ - ಪದ್ಯದ ಪ್ರತಿಯೊಂದು ಪಾದದಲ್ಲೂ ವಿಭಾಗಿಸುವ ಮಾತ್ರಗಳ ಅಥವಾ ಅಕ್ಷರಗಳ ಗುಂಪು ಮತ್ತು ಅಂಶಗಳ ಗುಂಪು.
  • ಒಂದು ಮಾತ್ರಾಕಾಲದಲ್ಲಿ ಉಚ್ಚಾರ ಮಾಡಲಾಗುವ ಅಕ್ಷರಗಳೆಲ್ಲ - ಲಘುಗಳು.
  • ಹ್ರಸ್ವಸ್ವರಗಳು ಮತ್ತು ಹ್ರಸ್ವಸ್ವರಗಳಿಂದ ಕೂಡಿದ ಗುಣಿತಾಕ್ಷರಗಳೆಲ್ಲ - ಲಘುಗಳು.
  • ಎರಡು ಮಾತ್ರಗಳ ಕಾಲದಲ್ಲಿ ಉಚ್ಚರಿಸಲ್ಪಟ್ಟ ಅಕ್ಷರಗಳೆಲ್ಲ - ಗುರುಗಳು.
  • ಗುರುಗಳಾಗುವ ಅಕ್ಷರಗಳು ಇವು - ದೀರ್ಘಸ್ವರ, ದೀರ್ಘಸ್ವರದಿಂದ ಕೂಡಿದ ಗುಣಿತಾಕ್ಷರಗಳು, ಅನುಸ್ವಾರ ವಿಸರ್ಗಗಳಿಂದ ಕೂಡಿದ ಅಕ್ಷರಗಳು, ಒತ್ತಕ್ಷರದ ಹಿಂದಿನ ಅಕ್ಷರ, ವ್ಯಂಜನಾಕ್ಷರದ ಹಿಂದಿನ ಅಕ್ಷರ, ಷಟ್ಪದಿಗಳಲ್ಲಿ ಬರುವ ಮೂರನೆಯ ಆರನೆಯ ಸಾಲಿನ ಕೊನೆಯಲ್ಲಿರುವ ಅಕ್ಷರಗಳು.
  • ಮಾತ್ರಾಗಣಗಳು ಎಂದರೆ - ಮೂರು, ನಾಲ್ಕು, ಐದು ಮಾತ್ರಗಳ ಗುಂಪುಗಳ ಲೆಕ್ಕವಿಟ್ಟುಕೊಂಡು ವಿಭಾಗಿಸುವ ಗಣಗಳು.
  • ಪದ್ಯಗಳ ಸಾಲುಗಳ ಅಕ್ಷರಗಳಿಗೆ ಗುರುಲಘುಗಳ ಗುರುತು ಮಾಡುವುದಕ್ಕೆ ಹೀಗೆಂದು ಹೆಸರು - ಪ್ರಸ್ತಾರ.
  • ಮಾತ್ರಾಗಣಗಳಿಂದ ಪದ್ಯಜಾತಿಗಳು ಇವಾಗಿವೆ - ಕಂದ, ಷಟ್ಪದಿ, ರಗಳೆ ಇತ್ಯಾದಿ.
  • ಕಂದ ಪದ್ಯವೆಂದರೆ - ನಾಲ್ಕು ಸಾಲುಗಳಿಂದ ಕೂಡಿದ ಪದ್ಯ.
  • ಕಂದ ಪದ್ಯದಲ್ಲಿ ಒಂದನೆಯ ಮೂರನೆಯ ಸಾಲುಗಳು ಸಮಾನವಾಗಿದ್ದು ಅವು - ನಾಲ್ಕು ಮಾತ್ರೆಯ ಮೂರು ಗಣಗಳಿಂದ ಕೂಡಿರುತ್ತವೆ.
  • ಕಂದ ಪದ್ಯದಲ್ಲಿನ ಮೂರನೆಯ ನಾಲ್ಕನೆಯ ಸಾಲುಗಳು ಸಮವಾಗಿದ್ದು ಅವು - ನಾಲ್ಕು ಮಾತ್ರೆಯ ಐದು ಗಣಗಳಿಂದ ಕೂಡಿರುತ್ತವೆ.
  • ಷಟ್ಪದಿ ಎಂದರೆ - ಆರು ಸಾಲುಗಳಿಂದ ಕೂಡಿದ ಪದ್ಯ.
  • ಷಟ್ಪದಿಯಲ್ಲಿರುವ ವಿಧಗಳ ಸಂಖ್ಯೆ - ಆರು.
  • ಷಟ್ಪದಿಯಲ್ಲಿರುವ ಆರು ವಿಧಗಳು - ಶರ, ಕುಸುಮ, ಭೋಗ, ಭಾಮಿನಿ, ಪರಿವರ್ಧಿನಿ, ವಾರ್ಧಕ ಷಟ್ಪದಿಗಳು.
  • ಶರ ಷಟ್ಪದಿಯ 1, 2, 4, 5ನೇಯ ಸಾಲುಗಳು ಸಮನಾಗಿದ್ದು ಅವು - ನಾಲ್ಕು ಮಾತ್ರೆಯ ಎರಡು ಗಣಗಳಿಂದ ಕೂಡಿರುತ್ತವೆ.
  • ಶರ ಷಟ್ಪದಿಯ 3, 6ನೇಯ ಸಾಲುಗಳು ಸಮನಾಗಿದ್ದು ಅವು - ನಾಲ್ಕು ಮಾತ್ರೆಯ ಮೂರು ಗಣಗಳಿಂದಲೂ, ಮೇಲೊಂದು ಗುರುವಿನಿಂದಲೂ ಕೂಡಿರುತ್ತವೆ.
  • ಕುಸುಮ ಷಟ್ಪದಿಯ 1, 2, 4, 5ನೇಯ ಸಾಲುಗಳು ಸಮನಾಗಿದ್ದು ಅವು - ಐದು ಮಾತ್ರೆಯ ಎರಡು ಗಣಗಳಿಂದ ಕೂಡಿರುತ್ತವೆ.
  • ಕುಸುಮ ಷಟ್ಪದಿಯ 3, 6ನೇಯ ಸಾಲುಗಳು ಸಮನಾಗಿದ್ದು ಅವು - ಐದು ಮಾತ್ರೆಯ ಮೂರು ಗಣಗಳಿಂದಲೂ, ಮೇಲೊಂದು ಗುರುವಿನಿಂದಲೂ ಕೂಡಿರುತ್ತವೆ.
  • ಭೋಗ ಷಟ್ಪದಿಯ 1, 2, 4, 5ನೇಯ ಸಾಲುಗಳು ಸಮನಾಗಿದ್ದು ಅವು - ಮೂರು ಮಾತ್ರೆಯ ನಾಲ್ಕು ಗಣಗಳಿಂದ ಕೂಡಿರುತ್ತವೆ.
  • ಭೋಗ ಷಟ್ಪದಿಯ 3, 6ನೇಯ ಸಾಲುಗಳು ಸಮನಾಗಿದ್ದು ಅವು - ಮೂರು ಮಾತ್ರೆಯ ಆರು ಗಣಗಳಿಂದಲೂ, ಮೇಲೊಂದು ಗುರುವಿನಿಂದಲೂ ಕೂಡಿರುತ್ತವೆ.
  • ಭಾಮಿನಿ ಷಟ್ಪದಿಯ 1, 2, 4, 5ನೇಯ ಸಾಲುಗಳು ಸಮನಾಗಿದ್ದು ಅವು - ಮೂರು ಮತ್ತು ನಾಲ್ಕು ಮಾತ್ರೆಯ ನಾಲ್ಕು ಗಣಗಳಿಂದ ಕೂಡಿರುತ್ತವೆ.
  • ಭಾಮಿನಿ ಷಟ್ಪದಿಯ 3, 6ನೇಯ ಸಾಲುಗಳು ಸಮನಾಗಿದ್ದು ಅವು - ಮೂರು ಮತ್ತು ನಾಲ್ಕು ಮಾತ್ರೆಯ ಆರು ಗಣಗಳಿಂದಲೂ, ಮೇಲೊಂದು ಗುರುವಿನಿಂದಲೂ ಕೂಡಿರುತ್ತವೆ.
  • ಪರಿವರ್ಧಿನಿ ಷಟ್ಪದಿಯ 1, 2, 4, 5ನೇಯ ಸಾಲುಗಳು ಸಮನಾಗಿದ್ದು ಅವು - ನಾಲ್ಕು ಮಾತ್ರೆಯ ನಾಲ್ಕು ಗಣಗಳಿಂದ ಕೂಡಿರುತ್ತವೆ.
  • ಪರಿವರ್ಧಿನಿ ಷಟ್ಪದಿಯ 3, 6ನೇಯ ಸಾಲುಗಳು ಸಮನಾಗಿದ್ದು ಅವು - ನಾಲ್ಕು ಮಾತ್ರೆಯ ಆರು ಗಣಗಳಿಂದಲೂ, ಮೇಲೊಂದು ಗುರುವಿನಿಂದಲೂ ಕೂಡಿರುತ್ತವೆ.
  • ವಾರ್ಧಕ ಷಟ್ಪದಿಯ 1, 2, 4, 5ನೇಯ ಸಾಲುಗಳು ಸಮನಾಗಿದ್ದು ಅವು - ಐದು ಮಾತ್ರೆಯ ನಾಲ್ಕು ಗಣಗಳಿಂದ ಕೂಡಿರುತ್ತವೆ.
  • ವಾರ್ಧಕ ಷಟ್ಪದಿಯ 3, 6ನೇಯ ಸಾಲುಗಳು ಸಮನಾಗಿದ್ದು ಅವು - ಐದು ಮಾತ್ರೆಯ ಆರು ಗಣಗಳಿಂದಲೂ, ಮೇಲೊಂದು ಗುರುವಿನಿಂದಲೂ ಕೂಡಿರುತ್ತವೆ.
  • ರಗಳೆಯಲ್ಲಿರುವ ಮೂರು ವಿಧಗಳು - ಉತ್ಸಾಹರಗಳೆ, ಮಂದಾನಿಲರಗಳೆ ಮತ್ತು ಲಲಿತರಗಳೆ.
  • ಎರಡೇಡು ಸಾಲುಗಳಲ್ಲಿ ಪ್ರಾಸನಿಯಮವಿಟ್ಟುಕೊಂಡು ಮೂರು ಮಾತ್ರೆಯ ನಾಲ್ಕು ಗಣಗಳ ಗಣನಿಯಮದಿಂದ ಸಾಲುಗಳ ನಿಯಮವಿಲ್ಲದೆ ಇರುವ ಪದ್ಯಜಾತಿಯೇ - ಉತ್ಸಾಹರಗಳೆ.
  • ನಾಲ್ಕು ಮಾತ್ರೆಯ ನಾಲ್ಕು ಗಣ ಪ್ರತಿಯೊಮ್ಮೆಯೂ ಬಂದು ಎರಡೇಡು ಸಾಲುಗಳಿಗೆ ಪ್ರಾಸನಿಯಮವಿರುವ ಪದ್ಯಜಾತಿಗೇ ಹೀಗೆನ್ನುವರು - ಮಂದಾನಿಲರಗಳೆ.
  • ಸಾಲುಗಳು ಇಂತಿಷ್ಟೇ ಇರಬೇಕೆಂಬ ನಿಯಮವಿಲ್ಲದೆ, ಪ್ರತಿಯೊಂದು ಪಾದದಲ್ಲೂ ಐದು ಮಾತ್ರೆಯ ನಾಲ್ಕು ಗಣಗಳನ್ನಿಟ್ಟು ಎರಡೇಡು ಸಾಲುಗಳಲ್ಲಿ ಪ್ರಾಸನಿಯಮವನ್ನು ಮುಖ್ಯವಾಗಿ ಆದಿಯಲ್ಲಿ ಪಾಲಿಸಿಕೊಂಡು ಬರೆಯಲ್ಪಟ್ಟ ಪದ್ಯಗಳೇ - ಲಲಿತರಗಳೆ.
  • ಅಕ್ಷರಗಣಗಳು ಎಂದರೆ - ಮೂರು ಮೂರು ಅಕ್ಷರಗಳ ಗುಂಪುಗಳನ್ನು ಒಂದೊಂದು ಗಣವೆಂದು ತಿಳಿಯುವ ಗಣಗಳು.
  • ಮೂರು ಮೂರು ಅಕ್ಷರಗಳ ಲೆಕ್ಕದಿಂದ ಗಣಗಳನ್ನು ವಿಂಗಡಿಸುವುದು ಈ ಛಂದಸ್ಸುಗಳಲ್ಲಿ ಮಾತ್ರ - ವೃತ್ತಜಾತಿಯ ಛಂದಸ್ಸು.
  • ಅಕ್ಷರಗಣಗಳಲ್ಲಿರುವ ವಿಧಗಳ ಸಂಖ್ಯೆ - ಎಂಟು.
  • ಮೂರು ಗುರು ಬರುವ ಮೂರಕ್ಷರದ ಗಣವೇ - ಮಗಣ.
  • ಮೂರು ಲಘು ಬರುವ ಮೂರಕ್ಷರದ ಗಣವೇ - ನಗಣ.
  • ಗುರು ಮೊದಲು ಬಂದು ಎರಡು ಲಘು ಬರುವ ಗಣವೇ - ಭಗಣ.
  • ಲಘು ಮೊದಲು ಬಂದು ಎರಡು ಗುರು ಬರುವ ಗಣವೇ - ಯಗಣ.
  • ಗುರು ನಡುವೆ ಬರುವ ಗಣವೇ - ಜಗಣ.
  • ಲಘು ನಡುವೆ ಬರುವ ಗಣವೇ - ರಗಣ.
  • ಗುರು ಕೊನೆಯಲ್ಲಿ ಬರುವ ಗಣವೇ - ಸಗಣ.
  • ಲಘು ಕೊನೆಯಲ್ಲಿ ಬರುವ ಗಣವೇ - ತಗಣ.
  • ಎಂಟು ಅಕ್ಷರಗಣಗಳನ್ನು ನೆನಪಿಡಲು ಈ ಸೂತ್ರವನ್ನು ಬಳಸುತ್ತಾರೆ - ಯಮಾತಾರಾಜಭಾನಸಲಗಂ.
  • ಪ್ರತಿ ಸಾಲಿನಲ್ಲೂ ಭ, ರ, ನ, ಭ, ಭ, ರ ಗಣಗಳೂ, ಮೇಲೆ ಒಂದು ಲಘು ಮತ್ತು ಒಂದು ಗುರು ಬರುವ ವೃತ್ತವೇ - ಉತ್ಪಲಮಾಲಾವೃತ್ತ.
  • ಉತ್ಪಲಮಾಲಾವೃತ್ತವನ್ನು ನೆನಪಿಡಲು ಬಳಸುವ ಸೂತ್ರ - ಉತ್ಪಲಮಾಲೆಯುವುದು ಭರಂ ನಭಭ ರಲಗಂ ನೆಗಳಿರ್ಲ್.
  • ಪ್ರತಿ ಸಾಲಿನಲ್ಲೂ ನ, ಜ, ಭ, ಜ, ಜ, ಜ, ರ ಎಂಬ ಏಳು ಗಣಗಳಿರುವ ವೃತ್ತವೇ - ಚಂಪಕಮಾಲಾವೃತ್ತ.
  • ಚಂಪಕಮಾಲಾವೃತ್ತವನ್ನು ನೆನಪಿಡಲು ಬಳಸುವ ಸೂತ್ರ - ನಜಭಜಜಂಜರಂ ಬಗೆಗೊಳ್ವುದಿರೆ ಚಂಪಕಮಾಲೆಯೆಂದಪರ್.
  • ಪ್ರತಿಯೊಂದು ಪಾದದಲ್ಲೂ ಮ, ಸ, ಜ, ಸ, ತ, ತ ಎಂಬ ಆರು ಗಣಗಳೂ, ಮೇಲೆ ಒಂದು ಗುರುವೂ ಇರುವ ವೃತ್ತವೇ - ಶಾರ್ದೂಲವಿಕ್ರೀಡಿತವೃತ್ತ.
  • ಶಾರ್ದೂಲವಿಕ್ರೀಡಿತವೃತ್ತವನ್ನು ನೆನಪಿಡಲು ಬಳಸುವ ಸೂತ್ರ - ಕಣ್ಕಪ್ಪಲ್ ಮಸಜಂಸತತಂಗಮುಮಾ ಶಾರ್ದೂಲವಿಕ್ರೀಡಿತಂ.
  • ಪ್ರತಿ ಸಾಲಿನಲ್ಲಿಯೂ ಸ, ಭ, ರ, ನ, ಮ, ಯ ಗಣಗಳಿಂದಲೂ, ಮೇಲೊಂದು ಲಘು ಮತ್ತು ಒಂದು ಗುರುವಿನಿಂದಲೂ ಕೂಡಿದ ಪದ್ಯಜಾತಿಯೇ - ಮತ್ತೇಭವಿಕ್ರೀಡಿತವೃತ್ತ.
  • ಮತ್ತೇಭವಿಕ್ರೀಡಿತವೃತ್ತದ ಲಕ್ಷಣಗಳನ್ನು ತಿಳಿಸುವ ಸೂತ್ರ - ಸಭರನಂದಯಲಂಗಮುಂ ಬಗೆಗೊಳ್ ಮತ್ತೇಭವಿಕ್ರೀಡಿತಂ.
  • ಪ್ರತಿಯೊಂದು ಪಾದದಲ್ಲೂ ಮ, ರ, ಭ, ನ, ಯ, ಯ, ಯ ಗಣಗಳಿರುವ ವೃತ್ತವೇ - ಸ್ರಗ್ಧರಾವೃತ್ತ.
  • ಸ್ರಗ್ಧರಾವೃತ್ತದ ಸೂತ್ರ - ತೋರೇಲ್ ಮರಭನಮಯಯಗಣಮುದೆ ತಾಂ ಸ್ರಗ್ಧರಾವೃತ್ತಮುಂ.
  • ಪ್ರತಿ ಸಾಲಿನಲ್ಲಿಯೂ ಸ, ತ, ತ, ನ, ಸ, ರ, ರ ಗಣಗಳಿಂದಲೂ, ಮೇಲೊಂದು ಗುರುವಿನಿಂದಲೂ ಕೂಡಿದ ವೃತ್ತವೇ - ಮಹಾಸ್ರಗ್ಧರಾವೃತ್ತ.
  • ಮಹಾಸ್ರಗ್ಧರಾವೃತ್ತದ ಸೂತ್ರ - ಸತತಂ ನಂ ಸಂ ರರಂಗಂ ನೆರೆದೆಸೆಯೆ ಮಹಾಸ್ರಗ್ಧರಾವೃತ್ತಮುಂ.
  • ಅಂಶಗಣಗಳು ಈ ರೀತಿಯ ಛಂದಸ್ಸುಗಳಲ್ಲಿ ಬಳಸಲ್ಪಡುತ್ತವೆ - ತ್ರಿಪದಿ, ಸಾಂಗತ್ಯ, ಅಕ್ಕರ ಇತ್ಯಾದಿ.


Post a Comment

0 Comments

Close Menu