Ad Code

ವಿಜಯಪುರ ಜಿಲ್ಲೆಯ ಮಾಹಿತಿ


  • ಈ ಜಿಲ್ಲೆಯಲ್ಲಿ ತಾಳಿಕೋಟೆ ಅಥವಾ ರಕ್ಕಸ ತಂಗಡಗಿ ಎಂಬ ಯುದ್ಧ ನಡೆದ ಭೂಮಿ ಇದೆ. ಈ ಕದನವು 1565 ಜನವರಿ 23 ರಂದು ನಡೆಯಿತು. ಈ ಕದನವು ಬಹುಮನಿ ಸುಲ್ತಾನರು ಮತ್ತು ವಿಜಯನಗರ ಸಾಮ್ರಾಜ್ಯದ ನಡುವೆ ನಡೆಯಿತು. ಇದರಲ್ಲಿ ವಿಜಯನಗರ ಸಾಮ್ರಾಜ್ಯಕ್ಕೆ ಸೋಲಾಯಿತು. ಈ ಕದನ ನಡೆಯುತ್ತಿದ್ದಾಗ ವಿಜಯನಗರ ಸಾಮ್ರಾಜ್ಯದ ಅರಸ ಸದಾಶಿವರಾಯ ಇದ್ದನು.
  • ಈ ಯುದ್ಧದ ನಾಯಕತ್ವವನ್ನು ಅಳಿಯರಾಮರಾಯ ವಹಿಸಿಕೊಂಡಿದ್ದನು.
  • ಭಾರತದ ಅತೀ ದೊಡ್ಡ ಗುಮ್ಮಟವಾದ ಗೋಲಗುಮ್ಮಟವು ಬಿಜಾಪುರದಲ್ಲಿದೆ. ಈ ಕಟ್ಟಡವನ್ನು ಮಹಮ್ಮದ್ ಆದಿಲ್ ಶಾ ಕಟ್ಟಿಸಿದನು. ಇಲ್ಲಿ ಮಹಮ್ಮದ್ ಆದಿಲ್ ಶಾನ ಸಮಾಧಿಯಾಗಿದೆ.
  • ಬಿಜಾಪುರದಲ್ಲಿರುವ ಇಬ್ರಾಹಿಂ ರೋಜಾವನ್ನು ದಕ್ಷಿಣ ಭಾರತದ ತಾಜ್ ಮಹಲ್ ಎಂದು ಕರೆಯಲಾಗುತ್ತದೆ. ಇದನ್ನು 2ನೇ ಇಬ್ರಾಹಿಂ ಆದಿಲ್ ಶಾ ಕಟ್ಟಿಸಿದನು.
  • ಬಸವನ ಬಾಗೇವಾಡಿ ಬಸವಣ್ಣನ ಜನ್ಮಸ್ಥಳವಾಗಿದೆ.
  • ಇದನ್ನು ಕರ್ನಾಟಕದ ಪಂಜಾಬ್ ಎಂದು ಕರೆಯುತ್ತಾರೆ.
  • ಇಲ್ಲಿ ಕೂಡಗಿ ಉಷ್ಣ ವಿದ್ಯುತ್ ಸ್ಥಾವರ ಸ್ಥಾಪಿಸಲಾಗಿದೆ.
  • ಇಲ್ಲಿ ಮಹಿಳಾ ವಿಶ್ವವಿದ್ಯಾಲಯವನ್ನು 2003ರಲ್ಲಿ ಸ್ಥಾಪಿಸಲಾಗಿದೆ. ಇದಕ್ಕೆ ಅಕ್ಕಮಹಾದೇವಿ ಮಹಿಳಾವಿಶ್ವವಿದ್ಯಾಲಯ ಎಂದು 2017 ರಲ್ಲಿ ನಾಮಕರಣ ಮಾಡಲಾಗಿದೆ.
  • ಆಲಮಟ್ಟಿ ಜಲಾಶಯ ಅಥವಾ ಲಾಲ್ ಬಹದ್ದೂರ್ ಶಾಸ್ತ್ರಿ ಜಲಾಶಯವನ್ನು ಕೃಷ್ಣಾನದಿಗೆ ಅಡ್ಡಲಾಗಿ ಕಟ್ಟಲಾಗಿದೆ.
  • ಕರ್ನಾಟಕದಲ್ಲಿ ಅತೀ ಕಡಿಮೆ ಅರಣ್ಯ ಹೊಂದಿದ ಜಿಲ್ಲೆಯಾಗಿದೆ.
  • ನವರಸಪುರ ಉತ್ಸವ ನಡೆಯುತ್ತದೆ. ನವರಸಪುರ ಉತ್ಸವವು ಸಂಗೀತಕ್ಕೆ ಸಂಬಂಧಿಸಿದೆ.
  • ಕೃಷ್ಣಾ, ದೋಣಿ ಮತ್ತು ಭೀಮಾ ನದಿಗಳು ಹರಿಯುತ್ತವೆ.
  • ಅಸರ್‌ಮಹಲ್, ಗಗನ್‌ಮಹಲ್, ಗೋಲಗುಮ್ಮಟ, ಇಬ್ರಾಹಿಂರೋಜಾ, ಬಾರಾಕಮಾನ್ ಎಂಬ ಕಟ್ಟಡಗಳಿವೆ.
  • 1956 ಕ್ಕಿಂತ ಮುಂಚೆ ಮುಂಬೈ ಪ್ರಾಂತ್ಯದಲ್ಲಿತ್ತು.
  • ಇಂಡಿ ತಾಲ್ಲೂಕಿನ ಸಾಲೋಟಗಿ ರಾಷ್ಟ್ರಕೂಟರ ಶಿಕ್ಷಣ ಕೇಂದ್ರವಾಗಿತ್ತು.
  • ಕರ್ನಾಟಕದಲ್ಲಿ ಅತೀ ಹೆಚ್ಚು ದ್ರಾಕ್ಷಿ ಬೆಳೆಯುವ ಜಿಲ್ಲೆಯಾಗಿದೆ.
  • ಕರ್ನಾಟಕದಲ್ಲಿ ಅತೀ ಹೆಚ್ಚು ಜೋಳ ಬೆಳೆಯುವ ಜಿಲ್ಲೆಯಾಗಿದೆ.
  • ಇಂಡಿಯಲ್ಲಿ ನಿಂಬೆ ಸಂಶೋಧನಾ ಕೇಂದ್ರವಿದೆ.

Post a Comment

0 Comments

Close Menu