ಕೂಡಲ ಸಂಗಮವು ಕೃಷ್ಣಾ ಮತ್ತು ಮಲಪ್ರಭಾ ನದಿಗಳ ದಂಡೆಯ ಮೇಲಿದೆ.
ಐಹೊಳೆ ದೇವಾಲಯವು ಭಾರತದ ಸಂಸತ್ತಿನ ಆಕಾರವನ್ನು ಹೊಂದಿದೆ. ಇದನ್ನು ದೇವಾಲಯಗಳ ತೊಟ್ಟಿಲು ಎಂದು ಕರೆಯುವರು.
ಯಡಹಳ್ಳಿ ಎಂಬ ಪ್ರದೇಶವು ಚಿಂಕಾರ ಜಿಂಕೆಗಳಿಗೆ ಪ್ರಸಿದ್ಧಿಯಾಗಿದೆ.
ಈ ಜಿಲ್ಲೆಯಲ್ಲಿ ತೋಟಗಾರಿಕಾ ವಿಶ್ವವಿದ್ಯಾಲಯ ಇದೆ.
ಹುನಗುಂದ ತಾಲೂಕಿನ ಐಹೊಳೆ ಗ್ರಾಮದ ಮೇಗುತಿ ದೇವಾಲಯದಲ್ಲಿ ಐಹೊಳೆ ಶಾಸನ ಇದೆ. ಈ ಶಾಸನವನ್ನು ಇಮ್ಮಡಿ ಪುಲಿಕೇಶಿಯ ಆಸ್ಥಾನದ ಕವಿ ರವಿಕೀರ್ತಿ ರಚಿಸಿದ. ಐಹೊಳೆ ಶಾಸನವು ನರ್ಮದಾ ನದಿ ಕದನಕ್ಕೆ ಸಂಬಂಧಿಸಿದೆ.
ಐಹೊಳೆ ಶಾಸನದಲ್ಲಿ ಕಾಳಿದಾಸನ ಹೆಸರನ್ನು ಉಲ್ಲೇಖಿಸಲಾಗಿದೆ.
ಐಹೊಳೆ ಶಾಸನವು ಸಂಸ್ಕೃತ ಭಾಷೆಯಲ್ಲಿದೆ.
ಇಲಕಲ್ ಪಿಂಕ್ ಕಲ್ಲಿನ ಗ್ರಾನೈಟ್ ಮತ್ತು ಸೀರೆಗಳಿಗೆ ಹೆಸರುವಾಸಿಯಾಗಿದೆ.
ಮುಧೋಳ ತಾಲೂಕಿನಲ್ಲಿ ಹಲಗಲಿ ಎನ್ನುವ ಊರು ಇದೆ.
ಇಲ್ಲಿ ಬೇಡರ ದಂಗೆಯು 1857 ರಲ್ಲಿ ನಡೆಯಿತು. ಈ ದಂಗೆಯು ಸಶಸ್ತ್ರ ದಂಗೆಯಾಗಿದೆ.
ಮುಧೋಳ ಹುಂಡ್ಸ್ ಎಂಬ ನಾಯಿ ತಳಿಗೆ ಹೆಸರುವಾಸಿಯಾಗಿದೆ.
ಮುಧೋಳದಲ್ಲಿ ರನ್ನ ಉತ್ಸವ ನಡೆಯುತ್ತದೆ.
ಇಲ್ಲಿ ಐಹೊಳೆ, ಬಾದಾಮಿ, ಪಟ್ಟದಕಲ್ಲು ಎಂಬ ಊರುಗಳಿವೆ.
ಪಟ್ಟದಕಲ್ಲು 1987 ರಲ್ಲಿ ವಿಶ್ವ ಪಾರಂಪರೆ ಪಟ್ಟಿಗೆ ಸೇರಿದೆ.
0 Comments