ಕುವೆಂಪು (1904-1994) ಕೃತಿ – ಶ್ರೀರಾಮಾಯಣ ದರ್ಶನಂ (1967)


  • ಇವರ ಪೂರ್ಣ ಹೆಸರು ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ.
  • ಇವರ ಜನನ 29/12/1904ರಲ್ಲಿ; ಸ್ಥಳ-ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ, (ಬೆಳೆದದ್ದು-ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಕುಪ್ಪಳ್ಳಿ).
  • ತಂದೆ-ವೆಂಕಟಪ್ಪಗೌಡ, ತಾಯಿ-ಸೀತಮ್ಮ, ಹೆಂಡತಿ-ಹೇಮಾವತಿಯವರು.
  • ಮೈಸೂರಿನಲ್ಲಿ ಎಂ.ಎ. ಪದವಿ ವ್ಯಾಸಂಗ ಮಾಡಿದರು.
  • ಮೈಸೂರು ವಿಶ್ವವಿದ್ಯಾಲಯದಲ್ಲಿ ಕನ್ನಡ ವಿಭಾಗದ ಅಧ್ಯಾಪಕರಾಗಿ ಹಾಗೂ ಕುಲಪತಿಗಳಾಗಿ ಕೊನೆಯ ವರ್ಷ ಮಾನಸ ಗಂಗೋತ್ರಿಯನ್ನು ಆರಂಭಿಸಿದರು.
  • 1922ರಲ್ಲಿ ತಮ್ಮ ಮೊದಲ ಇಂಗ್ಲಿಷ್ ಪದ್ಯಗಳ ಸಂಕಲನವನ್ನು ಬಿಗಿನರ್ಸ್ ಮ್ಯೂಸ್ ಪ್ರಕಟಿಸಿದರು.
  • ಆಗ ಇವರ ಮೊದಲ ಕಾವ್ಯನಾಮ ಕಿಶೋರ ಚಂದ್ರ ವಾಣಿ ಎಂದಿತ್ತು.
  • ಮುಂದೆ ಐರಿಷ್ ಕವಿ ಜೇಮ್ಸ್ ಕಸಿನ್ಸ್ ಕುವೆಂಪುರವರ ಇಂಗ್ಲಿಷ್ ವ್ಯಾಮೋಹ ಬಿಡಿಸಿ ಇವರಿಗೆ ಕನ್ನಡದಲ್ಲಿ ಬರೆಯುವಂತೆ ಪ್ರೇರೇಪಿಸಿದರು.

ಕವನ ಸಂಕಲನ – 1924ರಲ್ಲಿ ಅಮಲನ ಕಥೆ ಇವರ ಮೊದಲ ಕನ್ನಡ ಕೃತಿ.ಪ್ರೇಮ ಕಾಶ್ಮೀರ, ಜೇನಾಗುವೆ, ಚಂದ್ರಮಂಚಕೆ ಬಾ ಚಕೋರಿ, ಅನಿಕೇತನ, ಕೊಳಲು, ಕಿಂಕಿಣಿ, ಕಲಾಸುಂದರಿ, ಶೋಡಶಿ, ಅಗ್ನಿಹಂಸ, ಕೋಗಿಲೆ, ಸೋವಿಯತ್ ರಷ್ಯಾ, ನವಿಲು, ಪಕ್ಷಿಕಾಶಿ, ಕದಿರಡಕೆ, ಕನ್ನಡ ಕಾವ್ಯಂಜಲಿ, ಇತ್ಯಾದಿ.

ನಾಟಕಗಳು – ಬಿ.ಎ. ಓದುವಾಗಲೇ ಬೊಮ್ಮನಹಳ್ಳಿ ಕಿಂದರಿ ಜೋಗಿ ಪ್ರಕಟವಾಗಿತ್ತು. ಬೆರಳ್‌ಗೆ ಕೊರಳ್, ಶೂದ್ರ ತಪಸ್ವಿ, ಜಲಗಾರ, ರಕ್ತಾಕ್ಷಿ, ಯಮನ ಸೋಲು, ಮಹಾರಾತ್ರಿ, ವಾಲ್ಮೀಕಿ ಭಾಗ್ಯ, ಸ್ಮಶಾನ ಕುರುಕ್ಷೇತ್ರಂ, ಬಲಿದಾನ, ಚಂದ್ರಹಾಸ, ಬಿರುಗಾಳಿ, ಇತ್ಯಾದಿ.

ಕಥಾಸಂಕಲನ /ಪ್ರಬಂಧ – ನನ್ನ ದೇವರು, ಸನ್ಯಾಸಿ ಮತ್ತು ಇತರೆ ಕಥೆಗಳು, ಮಲೆನಾಡಿನ ಚಿತ್ರಗಳು.

ಮಹಾಕಾದಂಬರಿಗಳು – ಕಾನೂರು ಹೆಗ್ಗಡತಿ, (ಹೂವಯ್ಯ ಎಂಬ ಪಾತ್ರದ ಸುತ್ತ ಕಥೆ ಹೆಣೆದುಕೊಂಡಿದೆ. ಹೂವಯ್ಯ ಬದಲಾವಣೆಯನ್ನು ಬಯಸುವಂತವನಾಗಿದ್ದಾನೆ. ಪುರೋಹಿತಶಾಹಿ, ಜೀತದಾಳು, ವಸಾಹತುಶಾಹಿ ಈ ಮೂರು ವ್ಯವಸ್ಥೆಯ ಪ್ರತಿಭಟನೆ ಜೊತೆಗೆ ಪ್ರಕೃತಿ ವರ್ಣನೆ ರಮ್ಯವಾಗಿ ಮೂಡಿದೆ) ಹಾಗೂ ಮಲೆಗಳಲ್ಲಿ ಮದುಮಗಳು (ಮಧ್ಯಮ ವರ್ಗದ ಬದುಕಿಗೆ ಸಂಬಂಧಿಸಿದ್ದಾಗಿದೆ. ಮಲೆನಾಡಿನ ನಿಸರ್ಗವನ್ನು ಚಿತ್ರಿಸಲಾಗಿದೆ).

ವಿಮರ್ಶೆ/ಕಾವ್ಯಮಿಮಾಂಸೆ – ಕಾವ್ಯವಿಹಾರ, ತಪೋ ನಂದನ, ವಿಭೂತಿಪೂಜೆ, ದ್ರೌಪದಿಯ ಶ್ರೀಮುಡಿ, ರಸೋ ವೈ ಸಃ.

ಜೀವನ ಚರಿತ್ರೆಗಳು – ಶ್ರೀರಾಮಕೃಷ್ಣ ಪರಮಹಂಸ, ಸ್ವಾಮಿ ವಿವೇಕಾನಂದ ಇವುಗಳಲ್ಲಿ ಗದ್ಯಬರಹದ ವಿಶೇಷತೆ ಕಾಣುತ್ತದೆ.

ಅನುವಾದ ಗ್ರಂಥಗಳು – ವೇದಾಂತ, ಜನಪ್ರಿಯ ವಾಲ್ಮೀಕಿ ರಾಮಾಯಣ, ಗುರುವಿನೊಡನೆ ದೇವರಡೆಗೆ.

ಮಹಾಕಾವ್ಯ – ಶ್ರೀ ರಾಮಾಯಣ ದರ್ಶನಂ

ಖಂಡಕಾವ್ಯ – ಚಿತ್ರಾಂಗದಾ (ಹೊಸ ಛಂದಸ್ಸು ಬಳಕೆ)

ಆತ್ಮಕಥೆ – ನೆನಪಿನ ದೋಣಿಯಲ್ಲಿ

ಇತರೆ – ಶಿಶು ಸಾಹಿತ್ಯ, ನನ್ನ ಮನೆ, ಮೋಡಣ್ಣನ ತಮ್ಮ, ಮರಿ ವಿಜ್ಞಾನಿ, ಮೇಘಾಪುರ, ನರಿಗಳಿಗೇಕೆ ಕೋಡಿಲ್ಲ?, ಇತ್ಯಾದಿ.

ಬಿರುದು/ಪ್ರಶಸ್ತಿಗಳು

  • 2ನೇ ರಾಷ್ಟ್ರಕವಿ 1964
  • ಜ್ಞಾನಪೀಠ ಪ್ರಶಸ್ತಿ 1967, ಶ್ರೀರಾಮಾಯಣ ದರ್ಶನಂ.
  • ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ 1955ರಲ್ಲಿ.
  • ಮೊತ್ತಮೊದಲ ಪಂಪ ಪ್ರಶಸ್ತಿ – 1987
  • 1958 ಪದ್ಮಭೂಷಣ, ಕರ್ನಾಟಕ ರತ್ನ 1992.
  • 1957ರಲ್ಲಿ ಧಾರವಾಡದಲ್ಲಿ 37ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.
  • ರಸ ಋಷಿ ಎಂದು ಕರೆಯುತ್ತಿದ್ದರು.
  • 2004ರಲ್ಲಿ ಕುವೆಂಪು ಜನ್ಮಶತಮಾನೋತ್ಸವ ನೆನಪಿಗಾಗಿ ಕುವೆಂಪು ಭಾಷಾಭಾರತಿ ಎಂಬ ಸಂಸ್ಥೆಯನ್ನು ಕರ್ನಾಟಕ ಸರ್ಕಾರವು 2005ರಲ್ಲಿ ಸ್ಥಾಪಿಸಿದೆ.

Post a Comment

0 Comments

Close Menu